20 Unknown Facts about Mahatma Gandhi | ಮಹಾತ್ಮಾ ಗಾಂಧಿಯವರ ಬಗ್ಗೆ ನಿಮಗೆ ಗೊತ್ತಿರದ 20 ಸಂಗತಿಗಳು

 "ಮಹಾತ್ಮಾ ಗಾಂಧಿ" ಎಂಬ ಹೆಸರಿನಿಂದ ಪ್ರಸಿದ್ಧರಾದ ಮೋಹನ್‌ದಾಸ್ ಕರಮಚಂದ್ರ ಗಾಂಧೀಜಿಯವರನ್ನು 'ರಾಷ್ಟ್ರದ ಪಿತಾಮಹ' ಎಂದು ಕರೆಯಲಾಗುತ್ತದೆ. ಮಹಾತ್ಮ ಗಾಂಧಿಯವರ ಆದರ್ಶವೆಂದರೆ ಅಹಿಂಸೆ ಮತ್ತು ಸತ್ಯ. ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೊಡುಗೆ ನೀಡುವುದಲ್ಲದೆ, ಜಗತ್ತಿನಾದ್ಯಂತ ಜನರಿಗೆ ಸ್ಫೂರ್ತಿ ನೀಡಿದರು. ಇಷ್ಟೇ ಅಲ್ಲದೆ ಅವರು ಜಾತಿ, ಬಣ್ಣ, ಧರ್ಮದ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು.


Watch Video


     ಮಹಾತ್ಮ ಗಾಂಧಿ ಅಕ್ಟೋಬರ್ 2, 1869ರಂದು ಗುಜರಾತಿನ ಪೋರಬಂದರಿನಲ್ಲಿ ಜನಿಸಿದರು. ಅವರು ಬಾಂಬೆ ವಿಶ್ವವಿದ್ಯಾಲಯದಲ್ಲಿ ಒಂದು ವರ್ಷ ಕಾನೂನು ವ್ಯಾಸಂಗ ಮಾಡಿ, ನಂತರ ಲಂಡನ್ ಯೂನಿವರ್ಸಿಟಿ ಕಾಲೇಜಿಗೆ ಹೋಗಿ, 1891ರಲ್ಲಿ ಪದವಿ ಮುಗಿಸಿದರು. ಗಾಂಧೀಜಿ ಇಂಗ್ಲೆಂಡ್‌ನ ಬಾರ್ ಕೌನ್ಸಿಲ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ದಕ್ಷಿಣ ಆಫ್ರಿಕಾಕ್ಕೆ ಹೋಗಿ, ವರ್ಣಬೇಧ ನೀತಿಯನ್ನು ಅನುಭವಿಸಿದರು.

1. ಮಹಾತ್ಮಾ ಗಾಂಧಿಯವರ ಮಾತೃಭಾಷೆ ಗುಜರಾತಿಯಾಗಿದೆ.

2. ಗಾಂಧೀಜಿ ತಮ್ಮ ಶಾಲಾ ಶಿಕ್ಷಣವನ್ನು ರಾಜ್ಕೋಟ್ನ ಆಲ್ಫರ್ಡ್ ಹೈಸ್ಕೂಲಿನಲ್ಲಿ ಮಾಡಿದ್ದರು.


gandhi in young age in kannada, info mind, infomindkannada


3.
ಮಹಾತ್ಮಾ ಗಾಂಧಿಯವರ ಜನ್ಮದಿನವನ್ನು ವಿಶ್ವವ್ಯಾಪಿ "ಅಂತಾರಾಷ್ಟ್ರೀಯ ಅಹಿಂಸಾ ದಿನ"ವೆಂದು ಸ್ಮರಿಸಲಾಗುತ್ತದೆ.

4. ಗಾಂಧೀಜಿಯವರು ಅವರ ಕುಟುಂಬದಲ್ಲಿ ಕಿರಿಯ ಮಗು ಆಗಿದ್ದರು. ಅವರಿಗೆ ಎರಡು ಸಹೋದರರು ಮತ್ತು ಒಂದು ಸಹೋದರಿ ಇದ್ದರು.

5. ಮಹಾದೇವ್ ದೇಸಾಯಿ ಗಾಂಧೀಜಿಯವರ ಪರ್ಸನಲ್ ಅಸಿಸ್ಟೆಂಟ್ ಆಗಿದ್ದರು.

6. ಹಿಂದಿನ ಬಿರ್ಲಾ ಮನೆಯ ತೋಟದಲ್ಲಿ ಗಾಂಧೀಜಿಯವರ ಹತ್ಯೆ ಮಾಡಲಾಯಿತು.

7. ಗಾಂಧೀಜಿ ಮತ್ತು ಪ್ರಸಿದ್ಧ ಲೇಖಕ ಲಿಯೋ ಟಾಲ್ಸ್ಟಾಯ್ ಪತ್ರಗಳ ಮೂಲಕ ಸಂವಹನ ನಡೆಸಿದರು.


gandhi in kannada, tolstoy farm in kannada, info mind, infomindkannada


8. ಸತ್ಯಾಗ್ರಹ ಹೋರಾಟದಲ್ಲಿ ತನ್ನ ಸಹೋದ್ಯೋಗಿಗಳಾಗಿ ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗಿನಿಂದ 21 ಮೈಲಿ ದೂರದಲ್ಲಿರುವ, 1100 ಎಕರೆ ಪ್ರದೇಶದಲ್ಲಿ ಟಾಲ್ಸ್ಟಾಯ್ ಫಾರ್ಮ್ ಎಂಬ ಸಣ್ಣ ಕಾಲೊನಿಯನ್ನು ಗಾಂಧೀಜಿಯವರು ಸ್ಥಾಪಿಸಿದರು.

9. ಗಾಂಧೀಜಿ ಶುಕ್ರವಾರ ಜನಿಸಿದರು, ಭಾರತಕ್ಕೆ ಶುಕ್ರವಾರ ಸ್ವಾತಂತ್ರ್ಯ ಸಿಕ್ಕಿತು ಮತ್ತು ಗಾಂಧೀಜಿ ಅವರನ್ನು ಶುಕ್ರವಾರ ಹತ್ಯೆ ಮಾಡಲಾಯಿತು.

10. ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮಾತ್ರವಲ್ಲದೆ, ಕೆಳ ಜಾತಿಯವರಿಗೆ ನ್ಯಾಯಯುತ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದರು ಮತ್ತು ಅವರಿಗೆ ಬೆಂಬಲವಾಗಿ ಹಲವಾರು ಉಪವಾಸಗಳನ್ನು ಮಾಡಿದರು.

11.
1982ರಲ್ಲಿ 'ಗಾಂಧಿ' ಎಂಬ ಗಾಂಧೀಜಿಯವರ ಮೇಲೆ ಆಧಾರಿತ ಚಿತ್ರವು ಅತ್ಯುತ್ತಮ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದಿತ್ತು.


gandhi movie in kannada, info mind, infomindkannada


12. 1930ರ ಟೈಮ್ ಮ್ಯಾಗಜೀನ್‌ನಲ್ಲಿ ಗಾಂಧೀಜಿಯವರು 'ಮ್ಯಾನ್ ಆಪ್ ದಿ ಯಿಯರ್' ಆಗಿದ್ದರು.

13. ಮಹಾತ್ಮಾ ಗಾಂಧೀಯವರು ಬರಹಗಾರರಾಗಿದ್ದರು ಅವರು ಸಂಗ್ರಹಿಸಿದ ಕೃತಿಗಳ 50,000 ಪುಟಗಳನ್ನು ಹೊಂದಿದೆ.

14. ಗಾಂಧೀಜಿಯವರು ಶಾಂತಿ ನೊಬೆಲ್ ಪ್ರಶಸ್ತಿಗೆ ಐದು ಬಾರಿ ನಾಮಿನೇಟ್ ಆಗಿದ್ದಾರೆ.

15. ಭಾರತದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿಯವರು ಬ್ರಿಟಿಷ್ ವಿರುದ್ಧ ಹೋರಾಡಿದರು. ಅವರ ಮರಣದ 21 ವರ್ಷಗಳ ನಂತರ ಅವರನ್ನು ಗೌರವಿಸಲು, ಅವರ ಮುಖದ ಅಂಚೆ ಚೀಟಿಯನ್ನು ಬ್ರಿಟನ್ ಬಿಡುಗಡೆ ಮಾಡಿತು.


gandhi satyagraha in kannada, info mind, infomindkannada


16. ಗಾಂಧೀಜಿಯವರು 'ಮಹಾತ್ಮ' ಎಂಬ ಬಿರುದಿನಿಂದ ಹುಟ್ಟಿಲ್ಲ. ನೋಬಲ್ ಪ್ರಶಸ್ತಿ ಪುರಸ್ಕೃತ ಕವಿ ರವೀಂದ್ರನಾಥ್ ಟ್ಯಾಗೋರ್ ಗಾಂಧೀಜಿ ಅವರಿಗೆ 'ಮಹಾತ್ಮ' ಎಂಬ ಬಿರುದು ನೀಡಿದರು.

17. ಜವಾಹರ್ಲಾಲ್ ನೆಹರು ಸ್ವಾತಂತ್ರ್ಯವನ್ನು ಆಚರಿಸಲು ಡೆಸ್ಟಿನಿ ಭಾಷಣವನ್ನು ಮಾಡಿದ ಆ ಸಮಯದಲ್ಲಿ ಗಾಂಧೀಜಿ ಇರಲಿಲ್ಲ.

18. ಮಹಾತ್ಮಾ ಗಾಂಧಿ ಅಂತ್ಯಕ್ರಿಯೆಯ ಮೆರವಣಿಗೆ 8 ಕಿಲೋಮೀಟರ್ ಉದ್ದವಿತ್ತು.

19. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 1996ರಲ್ಲಿ ಮಹಾತ್ಮಾ ಗಾಂಧಿಯವರ ಭಾವಚಿತ್ರವನ್ನು ಪ್ರದರ್ಶಿಸುವ ಮೂಲಕ, ಗಾಂಧಿ ಸರಣಿಯ ನೋಟುಗಳನ್ನು ಬಿಡುಗಡೆ ಮಾಡಿತು. 1996ರಲ್ಲಿ ಬಿಡುಗಡೆಯಾದ ಸರಣಿಯು 10 ಮತ್ತು 500 ರೂಪಾಯಿ ನೋಟುಗಳನ್ನು ಹೊಂದಿವೆ.

20. ಗಾಂಧಿ ಮೆಮೋರಿಯಲ್ ಮ್ಯೂಸಿಯಂನ್ನು ತಮಿಳುನಾಡಿನ ಮಧುರೈ ನಗರದಲ್ಲಿ ಸ್ಥಾಪಿಸಲಾಯಿತು. ಇದನ್ನು 'ಗಾಂಧಿ ಮ್ಯೂಸಿಯಂ' ಎಂದು ಕರೆಯಲಾಗುತ್ತದೆ. ಇಲ್ಲಿ ಗಾಂಧೀಜಿಯವರ ರಕ್ತದ ಉಡುಪು ಇದೆ. ಆ ಉಡುಪನ್ನು ಗಾಂಧೀಜಿಯವರು ಗೋಡ್ಸೆ ಹತ್ಯೆ ಮಾಡಿದ ಸಮಯದಲ್ಲಿ ಧರಿಸಿದರು.

ಇವುಗಳನ್ನು ನೋಡಿ,






Info Mind

Post a Comment

0 Comments