ದಕ್ಷಿಣ ಭಾರತದ ದೊಡ್ಡ ರಾಜ್ಯವಾದ ಕರ್ನಾಟಕ ಯಾವುದೇ ಅಚ್ಚರಿಯಿಂದ ಕಡಿಮೆ ಇಲ್ಲ. ಕರ್ನಾಟಕ ಹಳೆಯ ಸಂಸ್ಕೃತಿ ಸಂಪ್ರದಾಯ ಮತ್ತು ಪರಂಪರೆಗೆ ಜನಪ್ರಿಯವಾಗಿದೆ. ಭಾರತದ ಕೆಲವು ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕರ್ನಾಟಕವಿಲ್ಲದೆ ಭಾರತ ಅಪೂರ್ಣವೆನಿಸುತ್ತದೆ.
ಐಟಿ ಹಬ್, ಶ್ರೀಗಂಧದ ಕಾಡುಗಳು, ಹಳೆಯ ಸ್ಮಾರಕಗಳು, ಪೂಜ್ಯ ಯಾತ್ರಾ ಸ್ಥಳಗಳು, ಅಸಂಖ್ಯಾತ ನೈಸರ್ಗಿಕ ಸ್ಥಳಗಳಿಗೆ ನೆಲೆಯಾಗಿರುವ ಕರ್ನಾಟಕ ಪ್ರತಿಯೊಂದು ರೀತಿಯ ಟ್ರಾವೆಲರ್ಗೂ ಸಂಪೂರ್ಣ ಪ್ಯಾಕೇಜ್ ಆಗಿದೆ.
1. ಕಾಫಿಯ ಅತಿದೊಡ್ಡ ರಫ್ತುದಾರ.
Karnataka Coffee
ಕರ್ನಾಟಕವು ದೇಶದ ಅತಿ ದೊಡ್ಡ ಕಾಫಿ ರಫ್ತುದಾರವಾಗಿದೆ. ಹಲವಾರು ಶತಮಾನಗಳ ಹಿಂದೆ, ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿತ್ತು. ಅಂದಿನಿಂದ ಕರ್ನಾಟಕದಲ್ಲಿ ಕಾಫಿ ತೋಟಗಳು ಸಾಮಾನ್ಯವಾಗಿದೆ. ಕರ್ನಾಟಕವು ಕಾಫಿಯನ್ನು ಅತಿದೊಡ್ಡ ರಫ್ತು ಮಾಡುವವರಷ್ಟೇ ಅಲ್ಲ, ಅತಿದೊಡ್ಡ ಗ್ರಾಹಕರಲ್ಲೂ ಒಂದಾಗಿದೆ. ಹೀಗಾಗಿ ಕಾಫಿ "ಕರ್ನಾಟಕ ರಾಜ್ಯ ಪಾನೀಯ" ಎಂದು ಹೇಳಬಹುದು.
2. ಹೆಚ್ಚಿನ ಸಂಖ್ಯೆಯ ಹುಲಿಗಳ ತಾಣ.
Tigers in Karnataka
ಕರ್ನಾಟಕವು ಅತಿಹೆಚ್ಚು ಅಭಯಾರಣ್ಯ ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ನೆಲೆಯಾಗಿದೆ. ಕರ್ನಾಟಕದಲ್ಲಿ ಹರಡಿರುವ ಪಶ್ಚಿಮ ಘಟ್ಟಗಳು ಭಾರತದ ಅತ್ಯಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿದೆ. ಆದ್ದರಿಂದ ಇದು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳನ್ನು ಉಳಿಸಿಕೊಳ್ಳುವುದರಲ್ಲಿ ಕರ್ನಾಟಕ ಯಶಸ್ವಿಯಾಗಿದೆ.
3. ಮೊದಲ ಪ್ರೈವೇಟ್ ರೇಡಿಯೋ ಸ್ಟೇಷನ್ನ ಮನೆ.
Radio City 91.1 FM
ಭಾರತದಲ್ಲಿ ಮೊದಲ ಪ್ರೈವೇಟ್ ರೇಡಿಯೋ ಸ್ಟೇಷನ್ ಸ್ಥಾಪಿಸಿದ್ದ ರಾಜ್ಯ ಕರ್ನಾಟಕವಾಗಿದೆ. 2001ರಲ್ಲಿ ರೇಡಿಯೊ ಸಿಟಿ 91.1 ಎಫ್ಎಂ ಅನ್ನು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಇಂದು ಈ ರಾಷ್ಟ್ರೀಯ ಚಾನೆಲ್ ದೇಶಾದ್ಯಂತ ತನ್ನದೇ ಆದ 50ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಇದು ನಿಜಕ್ಕೂ ಒಂದು ಸಾಧನೆ.
4. ಮೈಸೂರು ಅರಮನೆ.
Mysore Palace, Karnataka
ತಾಜ್ ಮಹಲ್ ನಂತರ ಭಾರತದಲ್ಲಿ ಭೇಟಿ ನೀಡಿದ ತಾಣ ಕರ್ನಾಟಕದ ಮೈಸೂರು ಅರಮನೆ. ಮೈಸೂರು ನಗರದ ಹೃದಯ ಭಾಗದಲ್ಲಿ ಮತ್ತು ವಿಶ್ವದ ಅತ್ಯಂತ ಜನಪ್ರಿಯ ರೀಗಲ್ ಕಟ್ಟಡಗಳಲ್ಲಿ ಒಂದಾದ ಮೈಸೂರು ಅರಮನೆಯನ್ನು 19ನೇ ಶತಮಾನದಲ್ಲಿ ನಿರ್ಮಿಸಲಾಗಿತ್ತು. ಅಂದಿನಿಂದ ಇದು ಜಗತ್ತಿನಾದ್ಯಂತ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ. ಭಾರತದ ಬೇರೆಡೆ ನೀವು ಈ ರೀತಿಯ ಡಿಲಕ್ಸ್ ಅರಮನೆಯನ್ನು ಕಾಣಲು ಸಾಧ್ಯವಿಲ್ಲ. ಹೀಗಾಗಿ ರೀಗಲ್ ಸೌಂದರ್ಯವನ್ನು ಕರ್ನಾಟಕದ ಹೆಮ್ಮೆ ಎಂದು ಕರೆಯುತ್ತಾರೆ.
5. ಭಾರತದ ಧ್ವಜಗಳನ್ನು ಮಾಡಲು ಅನುಮತಿ ಹೊಂದಿರುವ ಏಕೈಕ ರಾಜ್ಯ.
Bengeri, Karnataka
ಎಲ್ಲ ಭಾರತೀಯ ಧ್ವಜಗಳು ಎಲ್ಲಿಂದ ಬರುತ್ತದೆ ಎಂದು ಯೋಚಿಸಿದ್ದೀರಾ? ಭಾರತದ ಧ್ವಜಗಳನ್ನು ತಯಾರಿಸುವ ಅನುಮತಿಯನ್ನು ಕರ್ನಾಟಕ ಪಡೆದುಕೊಂಡಿದೆ. ಧಾರವಾಡ ಜಿಲ್ಲೆಯ ಬೆಂಗೇರಿಯಲ್ಲಿರುವ "ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಸಂಯುಕ್ತ ಸಂಘವು" ಭಾರತದ ಧ್ವಜಗಳನ್ನು ಉತ್ಪಾದಿಸುವ ಅಧಿಕಾರ ಹೊಂದಿರುವ ಘಟಕವಾಗಿದೆ. ಈ ಘಟಕವನ್ನು 1950ರ ದಶಕದಲ್ಲಿ ಗಾಂಧಿಯರ ಗುಂಪು ಸ್ಥಾಪಿಸಿತ್ತು. ಇಂದು ಇದು ದೇಶಾದ್ಯಂತ ಧ್ವಜಗಳನ್ನು ಪೂರೈಸುತ್ತಿದೆ.
6. ಭಾರತದಲ್ಲಿ ರಾಕೆಟ್ ಫಿರಂಗಿಗಳನ್ನು ತಯಾರಿಸಿದ ಮೊದಲ ರಾಜ್ಯ.
Tippu Sultan
ಮೈಸೂರು ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ಆಡಳಿತಗಾರ ಟಿಪ್ಪು ಸುಲ್ತಾನ್, ರಾಕೆಟ್ ಫಿರಂಗಿಗಳನ್ನು ತಯಾರಿಸಿದ ಭಾರತದ ಮೊಟ್ಟ ಮೊದಲ ವ್ಯಕ್ತಿಯಾಗಿದ್ದಾರೆ. ಬ್ರಿಟಿಷ್ ಸೈನ್ಯದ ಮೇಲೆ ಆಕ್ರಮಣ ಮಾಡಲು ಮತ್ತು ತನ್ನ ರಾಜ್ಯದ ಸ್ವಾತಂತ್ರ್ಯವನ್ನು ಕಾಪಾಡಲು ಟಿಪ್ಪು ಸುಲ್ತಾನ್ ಫಿರಂಗಿಯನ್ನು ತಯಾರಿಸಿದ್ದರು.
7. ಐದು ನದಿಗಳ ಭೂಮಿ- ಬಿಜಾಪುರ.
Gol Gumbaj
ಐದು ನದಿಗಳ ಭೂಮಿ ಕೇವಲ ಪಂಜಾಬ್ ಎಂದು ನೀವು ಭಾವಿಸಿದ್ದರೆ ನೀವು ಖಂಡಿತವಾಗಿಯೂ ನಿಮ್ಮನ್ನು ಸರಿಪಡಿಸಿಕೊಳ್ಳಬೇಕು. ಕರ್ನಾಟಕ ರಾಜ್ಯದಲ್ಲಿ ನೆಲೆಗೊಂಡಿರುವ ಬಿಜಾಪುರವು ಐದು ನದಿಗಳ ಭೂಮಿಯಾಗಿದೆ. ಪ್ರಾಚೀನ ಪಟ್ಟಣಗಳ ಮೂಲಕ ಹರಿಯುವ ಪ್ರಮುಖ ನದಿಗಳಲ್ಲಿ ಡೋನಿ ನದಿ, ಭೀಮಾ ನದಿ, ಕೃಷ್ಣ ನದಿ ಮತ್ತು ಸಿನಾ ನದಿ ಸೇರಿವೆ. ಕರ್ನಾಟಕದ ಖ್ಯಾತಿಯನ್ನು ಹೆಚ್ಚಿಸುವ ಬಿಜಾಪುರದ ಮತ್ತೊಂದು ಸಂಗತಿಯೆಂದರೆ ಬಿಜಾಪುರದ ಗೋಲ್ ಗುಮ್ಬಜ್. ಇದು ದೇಶದ ಅತಿ ದೊಡ್ಡ ಗುಮ್ಮಟವಾಗಿದ್ದು, ವಿಶ್ವದ ಎರಡನೇ ಅತಿದೊಡ್ಡ ಗುಮ್ಮಟವಿದೆ.
8. ಮೈಸೂರಿನಲ್ಲಿರುವ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್.
Oriental Research Institute, Mysore
ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದು ಭಾರತ ದೇಶದ ಅತ್ಯಂತ ಹಳೆಯ ಗ್ರಂಥಾಲಯಗಳಲ್ಲಿ ಒಂದಾಗಿದೆ. ಹಳೆಯ ಹಸ್ತಪ್ರತಿಗಳು, ಸಂಪಾದನೆ ಮತ್ತು ಪ್ರಕಟಣೆಗಳ ದೊಡ್ಡ ಸಂಗ್ರಹವನ್ನು ಈ ಇನ್ಸ್ಟಿಟ್ಯೂಟ್ ಹೊಂದಿದೆ. ಮೈಸೂರಿನಲ್ಲಿರುವ ಈ ಸುಂದರ ಗ್ರಂಥಾಲಯವು ಚಾಣಕ್ಯರ ಅರ್ಥಶಾಸ್ತ್ರದ ಹಳೆಯ ಪಠ್ಯವನ್ನು ಸಹ ಹೊಂದಿದೆ. ನೀವು ಪುಸ್ತಕ ಪ್ರಿಯರಾಗಿದ್ದರೆ ನಿಜವಾಗಿಯೂ ಈ ಪುಸ್ತಕ ಜಗತ್ತಿಗೆ ಭೇಟಿ ನೀಡಬೇಕು. Typed By, Krishna Kn
Don't forget to Comment Your Opinion on This Article
0 Comments