How to be Happy in Life | ಜೀವನದಲ್ಲಿ ಸಂತೋಷವಾಗಿರಲು 4 ಸೂತ್ರ

ಜೀವನದಲ್ಲಿ ಸಂತೋಷದಿಂದಿರುವುದು ಎಲ್ಲರ ಹಕ್ಕು. ನೀವು ಸಂತೋಷವಾಗಿರಲು ತುಂಬಾ ಚಿಂತೆ ಮಾಡಬಾರದು ಮತ್ತು ತುಂಬಾ ತಲೆ ಕೆಡಿಸಿಕೊಳ್ಳಬಾರದು. ಏಕೆಂದರೆ, ಚಿಂತೆ ಮತ್ತು ತಲೆಕೆಡಿಸಿಕೊಳ್ಳುವುದರಿಂದ ನಾವು ಖುಷಿಪಡಲು ಸಾಧ್ಯವಾಗುವುದಿಲ್ಲ.

happy-in-life


     ಆದರೆ, ಜೀವನದಲ್ಲಿ ನಾವು ಪಡುವ ಕಷ್ಟಕ್ಕೆ ಚಿಂತೆ ಬರುವುದು ಸಹಜ, ಇದರಿಂದ ತಲೆನೋವು ಹೆಚ್ಚು. ಹೀಗಾಗಿ ನೀವು ಇನ್ಫೋ ಮೈಂಡ್ ಹೇಳುವ ನಾಲ್ಕು ಮಾರ್ಗ ಬಳಸಿದರೆ ಖುಷಿಯಾಗಿರಲು ಸಾಧ್ಯವಾಗಿದೆ.

1. ಖುಷಿಯಲ್ಲಿದ್ದಾಗ ಪ್ರಾಮಿಸ್ ಮಾಡಬೇಡಿ.


how to be happy in life, kannada, info mind
happy-in-life

      ನಾವು ಜೀವನದಲ್ಲಿ ಪ್ರಾಮಿಸ್ ತುಂಬಾ ಮಾಡುತ್ತೇವೆ. ಹೇಗೆಂದರೆ " ಪ್ರಾಮಿಸ್ ನಾನು ನಿಮ್ಮ ಕೆಲಸವನ್ನು ನಾಳೆ ಮುಗಿಸುತ್ತೇನೆ " ಈ ರೀತಿ. ಈ ಪ್ರಾಮಿಸ್ ಮಾಡುವುದು ತುಂಬಾವೆಂದರೆ ನಾವು ಖುಷಿಯಲ್ಲಿದ್ದಾಗ. ನಾವು ಖುಷಿಯಲ್ಲಿದ್ದಾಗ ಜೀವನದಲ್ಲಿ ಬರುವ ಕಷ್ಟವನ್ನು ಮರೆತು ಪ್ರಾಮಿಸ್ ಮಾಡುತ್ತೇನೆ. ಕೊನೆಗೆ ನಿಮ್ಮ ಈ ಪ್ರಾಮಿಸ್ ನಿಮಗೆ ತಲೆನೋವಾಗುತ್ತದೆ.

2. ದುಃಖದಲ್ಲಿದ್ದಾಗ ಯಾವುದೇ ಡಿಸಿಶನ್ ತೆಗೆದುಕೊಳ್ಳಬೇಡಿ.


     ಒಂದು ಕಂಪನಿ ಪೂರ್ತಿ ಲಾಭದಿಂದ ನಡೆಯುತ್ತಿರುತ್ತದೆ. ಆದರೆ ಒಂದು ದಿನ ನಷ್ಟ ಅನುಭವಿಸುತ್ತದೆ. ಆ ಕಂಪನಿಯ ಮಾಲೀಕ ದುಃಖಿತನಾಗಿ, ಇನ್ನು ಕಂಪನಿ ಬೆಳೆಸಲು ಇರುವ ಮಾರ್ಗವೆಂದರೆ ಸ್ವಲ್ಪ ಕೆಲಸಗಾರರನ್ನು ಬಿಡಿಸುವುದೆಂದು. ಇದರಿಂದ ಅವನು ಇದರ ಬಗ್ಗೆ ಸ್ವಲ್ಪ ಕೆಲಸಗಾರರಿಗೆ ಕೇಳಿದಾಗ, ಅವರು ಕಂಪನಿಯನ್ನು ಕೆಲಸಗಾರರನ್ನು ಬಿಡಿಸದೆ ಕಂಪನಿ ಬೆಳೆಸುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ತುಂಬಾ ದುಃಖದಲ್ಲಿದ್ದ ಮಾಲೀಕನಿಗೆ ಅದು ಕೇಳುವುದಿಲ್ಲ. ಬದಲಾಗಿ ಅವನು ಅಭಿಪ್ರಾಯ ಕೊಟ್ಟವನನ್ನು ಕೆಲಸದಿಂದ ಬಿಡಿಸಿದ. ಈ ಕಥೆ ಕೇವಲ ಅರ್ಥ ಮಾಡಿಸಲು ಇದರಲ್ಲಿ ಲಾಜಿಕ್ ಹುಡುಕ ಬೇಡಿ. ನಿಮ್ಮ ಜೀವನದಲ್ಲಿ ನೀವು ಬೇಸರದಲ್ಲಿದಾಗ ಯಾವುದೇ ಡಿಶಿಶನ್ ತೆಗೆದುಕೊಳ್ಳಬೇಡಿ.

3. ಸಿಟ್ಟಿನಲ್ಲಿದ್ದಾಗ ಹಿಂತಿರುಗಿ ಮಾತನಾಡಬೇಡಿ.


how to be happy in life, kannada, info mind
happy-in-life

     ಮನುಷ್ಯ ಸಿಟ್ಟಿನಲ್ಲಿದ್ದಾಗ ಅವನ ದೇಹ ಅವನ ಕಂಟ್ರೋಲಿನಲ್ಲಿ ಇರುವುದಿಲ್ಲ. ಹೀಗಾಗಿ ಅವನು ಹಿಂತಿರುಗಿ ಮಾತನಾಡುತ್ತಾನೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ, ಕೆಟ್ಟ ಸಮಯ ಹೋಗಬಹುದು, ಆದರೆ ಕೆಟ್ಟ ಮಾತು ಹೋಗುವುದಿಲ್ಲ. ಹೀಗಾಗಿ ನಿಮಗೆ ಎಷ್ಟೇ ಸಿಟ್ಟು ಬಂದರು, ಇತರರಿಗೆ ಹಿಂತಿರುಗಿ ಮಾತನಾಡಬೇಡಿ.

4. ಮುಂದಿರುವ ವ್ಯಕ್ತಿ ನಿಮ್ಮ ಮಾತು ಕೇಳಿಲವೆಂದರೆ ನಿಮ್ಮಿಬ್ಬರ ಮಧ್ಯೆ ಒಂದು ಬಾಗಿಲು ಮಾಡಿ.


how to be happy in life, kannada, info mind
happy-in-life

     ಒಂದು ವೇಳೆ ನಿಮಗೆ ಪ್ರಮುಖನಾಗಿರುವ ವ್ಯಕ್ತಿ ಹತ್ತಿರ ಮಾತನಾಡಲು ಹೋಗಿ, ಅವನು ನಿಮ್ಮನ್ನು ತುಂಬಾ ನಿರ್ಲಕ್ಷಿಸಿದರೆ, ನೀವು ಅವನ ಜೊತೆ ತುಂಬಾ ಮಾತನಾಡದಿರುವುದೇ ಒಳ್ಳೆಯದು. ಏಕೆಂದರೆ ಅವನು ನಿಮ್ಮ ಮಾತಿಗೆ ಉತ್ತರ ಕೊಟ್ಟಿಲ್ಲವೆಂದರೆ ನಿಮಗೆ ದುಃಖವಾಗುತ್ತದೆ. ಹೀಗಾಗಿ ಅಂಥ ವ್ಯಕ್ತಿಗಳಿಂದ ಸ್ವಲ್ಪ ದೂರವಿರಿ.

By,
      Krishna Kn

Don't forget to Comment Your Opinion on This Article

Share and Support Us

Info Mind

Post a Comment

0 Comments